ದೇವಿಶ್ರೀ ಮೂವೀಸ್ ಲಾಂಛನದಲ್ಲಿ ದೇವಿಶ್ರೀ ಗುರೂಜಿ ನಿರ್ಮಿಸುತ್ತಿರುವ ಕೈತುತ್ತು ಚಿತ್ರಕ್ಕೆ ಕಳೆದ ವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ನಾಗನಾಥೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರೆವೇರಿತು. ಪ್ರೇಮಿಗಳಿಬ್ಬರು ಬಂದು ದೇವರೇ ನಾವಿಬ್ಬರು ಮನೆ ಬಿಟ್ಟು ಬಂದಿದ್ದೇವೆ. ನಮ್ಮಿಬ್ಬರಿಗೆ ಯಾವುದೇ ಕಷ್ಟ ಕೊಡದೇ ಕಾಪಾಡು ದೇವರೇ ಎಂದು ಹೇಳುವ ಮೊದಲ ದೃಶ್ಯಕ್ಕೆ ನಿರ್ಮಾಪಕ ಎಂ.ಎಸ್.ಸುರೇಶ್ ಬಾಬು ಕ್ಲಾಪ್ ಮಾಡಿದರೆ ದೇವಿಶ್ರೀ ಗುರೂಜಿ ಕ್ಯಾಮರಾ ಚಾಲನೆ ಮಾಡಿದರು.
ರಾಜೀವ್ ಕೃಷ್ಣಗಾಂಧಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಆರ್.ಪ್ರಮೋದ್ ಛಾಯಾಗ್ರಹಣ, ಕೆ.ಕಲ್ಯಾಣ್ ಸಾಹಿತ್ಯ ಮತ್ತು ಸಂಗೀತ, ಎಸ್.ಎಸ್.ಕೆ.ಸಂದೀಪ್ ನೃತ್ಯನಿರ್ದೇಶನ, ಆರ್.ಡಿ.ರವಿ, ಸಂಕಲನ ಮುತ್ತು ಚಂದ್ರ ಸಹನಿರ್ದೇಶನವಿದೆ. ತಾರಾ, ಗೋಪಿಕರ್, ಕಿಲ್ಲರ್ ವೆಂಕಟೇಶ್, ರಾಜೇಂದ್ರ, ಕೃಷ್ಣಯ್ಯ, ಮಾ|| ಯಶವಂತ್, ಶಶಿಕಲ, ಸೌಮ್ಯ, ತುಳಸಿ, ಅಲ್ಲಂ ಮಣಿ ತಾರಾಬಳಗದಲ್ಲಿದ್ದಾರೆ.